ರಂಗಭೂಮಿ (ರಿ.) ಉಡುಪಿ

44ನೆಯ ರಾಜ್ಯ ಮಟ್ಟದ ಕನ್ನಡ ನಾಟಕ ಸ್ಪರ್ಧೆ - 2023ರ ಫಲಿತಾಂಶ

(ದಿ। ಡಾ। ಟಿ.ಎಂ.ಎ ಪೈ, ದಿ। ಎಸ್. ಎಲ್. ನಾರಾಯಣ ಭ unಟ್ ಮತ್ತು ದಿ। ಮಲ್ಪೆ ಮಧ್ವರಾಜ್ ಸ್ಮಾರಕ )

ದ್ವಿತೀಯ ಬಹುಮಾನವಾದ ದಿ| ಮಲ್ಪೆ ಮಧ್ವರಾಜ್ ಸ್ಮಾರಕ ಶ್ರೀ ಪ್ರಮೋದ್ ಮಧ್ವರಾಜ್ ರವರ ಕೊಡುಗೆಯಾದ ರೂ.25,000/- ನಗದು ಬಹುಮಾನ ಮತ್ತು ಸ್ಮರಣಿಕೆ ಹಾಗೂ ಡಾ. ಆರ್.ಪಿ. ಕೊಪ್ಪೀಕರ್ ಸ್ಮಾರಕ ಪರ್ಯಾಯ ಫಲಕ ಮತ್ತು ಯು.ಪಿ. ಶೆಣೈ ಸ್ಮಾರಕ ಸ್ಮರಣಿಕೆಯು "ರಂಗರಥ (ರಿ.) ಬೆಂಗಳೂರು ” ತಂಡದ "ಕ್ರೌಂಚಗೀತಾ " ನಾಟಕಕ್ಕೆ ಲಭಿಸಿದೆ.

*********

ಬಹುಮಾನಗಳ ವಿವರ :

ಶ್ರೇಷ್ಠ ನಿರ್ದೇಶಕ ದ್ವಿತೀಯ - * ಶ್ರೀ ಆಸಿಫ್ ಕ್ಷತ್ರಿಯ & ಶ್ವೇತಾ ಶ್ರೀನಿವಾಸ್"

ನಾಟಕ – " ಕ್ರೌಂಚಗೀತಾ "

ತಂಡ - ರಂಗರಥ (ರಿ.) ಬೆಂಗಳೂರು"

********

ಶ್ರೇಷ್ಠ ನಟಿ ದ್ವಿತೀಯ:

ಡಾ. ಮಾಧವಿ ಎಸ್. ಭಂಡಾರಿ ಪ್ರಾಯೋಜಿತ ನಗದು ಬಹುಮಾನ ರೂ. 2,000 ಮತ್ತು ದಿ|ಶ್ರೀನಿವಾಸ ಎಸ್. ಶೆಟ್ಟಿಗಾರ್ ಸ್ಮಾರಕ ಸ್ಮರಣಿಕೆ -

# "ರಂಗರಥ (ರಿ.) ಬೆಂಗಳೂರು " ತಂಡದ " ಕ್ರೌಂಚಗೀತಾ" ನಾಟಕದ "ಸೀತಾ" ಪಾತ್ರಧಾರಿಣಿ "ಶ್ವೇತಾ ಎಸ್".

**********

ಶ್ರೇಷ್ಠ ಸಂಗೀತ ಪ್ರಥಮ :

ರಂಗನಟ ಎನ್.ರಾಜಗೋಪಾಲ ಬಲ್ಲಾಳ್ ಪ್ರಾಯೋಜಿತ ನಗದು ಬಹುಮಾನ ರೂ.3,000 ಮತ್ತು ದಿ| ಉಡುಪಿ ದಾಸ ಭಟ್ ಸ್ಮಾರಕ ಸ್ಮರಣಿಕೆ -

'ಭಿನ್ನಷಡ್ಗ" ನಾಟಕ - "ಕ್ರೌಂಚಗೀತಾ" ತಂಡ - " ರಂಗರಥ (ರಿ.) ಬೆಂಗಳೂರು "

ಶ್ರೇಷ್ಠ ರಂಗಸಜ್ಜಿಕೆ ಮತ್ತು ರಂಗಪರಿಕರ :-

ದ್ವಿತೀಯ : ದಿ|ರವೀಂದ್ರ ಬಿ.ಕೋಟ್ಯಾನ್ ಸ್ಮರಣಾರ್ಥ ನಗದು ಬಹುಮಾನ ರೂ. 2,000 ಮತ್ತು ಹೋಟೆಲ್ ತಾಂಬೂಲಮ್ ಪ್ರಾಯೋಜಿತ ಸ್ಮರಣಿಕೆ -

ನಾಟಕ - "ಕ್ರೌಂಚಗೀತಾ "

ತಂಡ - " ರಂಗರಥ (ರಿ.) ಬೆಂಗಳೂರು"

*********

ಶ್ರೇಷ್ಠ ಪ್ರಸಾಧನ :-

ದ್ವಿತೀಯ: ರಂಗನಟ ಯು.ಎಂ.ಅಸ್ಲಾಂ ಪ್ರಾಯೋಜಿತ ನಗದು ಬಹುಮಾನ ರೂ. 2,000 ಮತ್ತು ದಿ| ವಿ. ಪ್ರಭಾಕರ ಹೆಗ್ಡೆ ಸ್ಮಾರಕ ಸ್ಮರಣಿಕೆ -.

# ನಾಟಕ: " ಕ್ರೌಂಚಗೀತಾ" ನಾಟಕ, ತಂಡ - ರಂಗರಥ (ರಿ.) ಬೆಂಗಳೂರು

********

ಶ್ರೇಷ್ಠ ರಂಗ ಬೆಳಕು :

ದ್ವಿತೀಯ : ಶ್ರೀಮತಿ ಬೀಬಿ ಜಾನ್ - ಖಲಂದರ್ ಸಾಬ್, ಅರಸೀಕೆರೆ ಸ್ಮಾರಕ ನಗದು ಬಹುಮಾನ ರೂ.2,000 ಮತ್ತು ಡಾ. ಬಿ.ಬಿ. ಶೆಟ್ಟಿ ಸ್ಮಾರಕ ಸ್ಮರಣಿಕೆ -

"ಶ್ರೀ ರವಿಶಂಕರ್"

ನಾಟಕ - "ಕ್ರೌಂಚಗೀತಾ"

ತಂಡ -"ರಂಗರಥ (ರಿ.) ಬೆಂಗಳೂರು "

*******

ಮಣಿಪಾಲ ಅಕಾಡೆಮಿ ಆಫ್ ಜನರಲ್ ಎಜುಕೇಶನ್, ಪಿ.ವಿ.ಎಸ್. ಗ್ರೂಪ್ಸ್ ಮಂಗಳೂರು, ಎಮ್.ಜಿ.ಎಮ್ ಕಾಲೇಜು, ಉಡುಪಿ, ಶ್ರೀ ಪ್ರಮೋದ್ ಮಧ್ವರಾಜ್ ಹಾಗೂ ಹಲವಾರು ಸಂಸ್ಥೆಗಳ, ಕಲಾ ಪೋಷಕರ ಸಹಕಾರದೊಂದಿಗೆ ಅತ್ಯಂತ ಯಶಸ್ವಿಯಾಗಿ 2023ರ ನವೆಂಬರ್ 22 ರಿಂದ ದಶಂಬರ್ 03 ರವರೆಗೆ 12 ದಿನಗಳ ಕಾಲ ಈ ರಾಜ್ಯ ಮಟ್ಟದ ನಾಟಕ ಸ್ಪರ್ಧೆಯು ನಡೆಯಿತು. ಈ ಬಾರಿಯ ಸ್ಪರ್ಧೆಯ ತೀರ್ಪುಗಾರರಾಗಿ ಉಡುಪಿಯ ಶ್ರೀ ಕೆ.ಲಕ್ಷ್ಮೀನಾರಾಯಣ ಭಟ್, ಹೆಗ್ಗೋಡಿನ ಶ್ರೀ ಶ್ರೀಪಾದ್ ಭಾಗವತ್ , ಮೈಸೂರಿನ ಶ್ರೀ ವಿನಾಯಕ ಭಟ್ ಹಾಸನಗಿ, ತಿಪಟೂರಿನ ಶ್ರೀ ಸತೀಶ್ ತಿಪಟೂರು ಹಾಗೂ ಉಡುಪಿಯ ಶ್ರೀ ಎಂ.ಶ್ರೀನಿವಾಸ ಭಟ್ ಇವರುಗಳು ಸಹಕರಿಸಿದ್ದರು.

ನಾಟಕ ಸ್ಪರ್ಧೆಯ ಯಶಸ್ವಿಗೆ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ "ರಂಗಭೂಮಿ (ರಿ.) ಉಡುಪಿ" ಸಂಸ್ಥೆಯ ಹೃತ್ಪೂರ್ವಕ ಕೃತಜ್ಞತೆಗಳು.

"ರಂಗಭೂಮಿ ಪ್ರಶಸ್ತಿ ಪ್ರಧಾನ ಸಮಾರಂಭ "ವು 2024ರ ಜನವರಿ 4ನೇ ವಾರದಲ್ಲಿ " ರಂಗಭೂಮಿ ರಂಗೋತ್ಸವ" ದಲ್ಲಿ 44ನೇ ರಾಜ್ಯ ಮಟ್ಟದ ಕನ್ನಡ ನಾಟಕ ಸ್ಪರ್ಧೆಯ ಬಹುಮಾನ ವಿತರಣಾ ಕಾರ್ಯಕ್ರಮ" ವು ಉಡುಪಿ ಎಂಜಿಎಂ ಕಾಲೇಜಿನ ಮುದ್ದಣ ಮಂಟಪದಲ್ಲಿ ನಡೆಯಲಿದೆ.